Monday 3 June 2013

Naanemba bhrame

ಅನಂತಸೃಷ್ಟಿಯ ಕಿಡಿಯಾಗಿ
ನಿನ್ನಿಂದುದಿಸಿದೀ ಕಾಯವನು
"ನಾನು" ನಾನೆಂಬುದೀ ಮನವು,
ಎನಿತೀಸು ಮರುಳೋ ತನಗೆ!!


ನಿನ್ನಿಚ್ಛೆಯಂತೆಯೇ ನಡೆಯುವುದು ಎಲ್ಲವು;
ಆದರೇನಂತೆ, ಎಲ್ಲ ಕಾರ್ಯಕು  ಕಾರಣವು
"ನಾನು" ನಾನೆಂಬುದೀ ಮನವು,
ಎನಿತೀಸು ಭ್ರಾಂತಿಯೋ ತನಗೆ!!


ನಾನೆಂಬ ಸೆರೆಯೊಳು ಸಿಲುಕಿ
ನಿನ್ನ ನಿಲುವನು ಮರೆತು
ತನ್ನ ಭ್ರಮೆಯೊಳಗಿಂತು
ಕುರುಡಾಗಿಹುದೆನ್ನ ಮನವು.


ನಾನೆಂಬುದಳಿಯುವ ಮೊದಲು
ನಿನ್ನನರಿಯಲು ಬಹುದೆ?
ಹರಹರಾ! ಎನ್ನ ಮರುಳನ್ನು ಮಾಣಿಸೈ ;
ನಾನೆಂಬ ಭ್ರಮೆಯನು ಕಳೆದು
ನಿನ್ನತ್ತ ತೋರೈ ವಿಷ್ಣುವಲ್ಲಭ.

No comments:

Post a Comment