Saturday 22 June 2013

ಮನಸಿಗೊಂದು ಕಿವಿಮಾತು

ಮರುಳು ಕಳೆಯಿತೆ? ಮನವೆ,
ಭ್ರಮೆಯು ಕಳೆಯಿತೆ? ಹೇಳು;


'ನಾನು' ನಾನೆಂದೊರಲಿ ಕುರುಡಾಗಿ ನಡೆದಿದ್ದೆ;
ಮನಕೆ ಬಂದಂತೆಲ್ಲ ಬಡಬಡಿಸಿ ನುಡಿದಿದ್ದೆ;
ಇಂದು ಏಕೀ ಮೌನ, ಸತ್ಯದs ಅರಿವಾಯ್ತೆ?
ಈಗ ಎಲ್ಲಿದೆ ಧ್ಯಾನ, ಎಲ್ಲವುs ಸರಿಯಾಯ್ತೆ?


ಹರಿಯ ಮರೆತಿರುವಾಗ ಹದುಳವಿನ್ನೇನಹದು,
ಅವನ ಜರೆದರೆ ನೀನು ಮುಕುತಿಯಿನ್ನೆಲ್ಲಿಯದು..?

ಭಂಡತನವನು ಮಾಣು, ನಿನ್ನಲವನನೆ ಕಾಣು;
ಎಲ್ಲ ತಪ್ಪನು ಕ್ಷಮಿಸಿ ನಿನ್ನ ಪೊರೆವನು ತಾನು.

No comments:

Post a Comment