Sunday 16 June 2013

ಸ್ತುತಿ

ಶ್ರೀಯನುರದೊಳ್ ಧರಿಸಿ ಸೊಬಗಿಗಧಿಪತಿ ಎನಿಸಿ
ಸಕಲವಿಶ್ವವ ಸೃಜಿಸಿ ಲೀಲೆಯಿಂದಾಳುತಿಹ
ವಾರಿಜನಾಭ ಶ್ರೀ ವರಶೇಷಶಯನನು ಸರಸಿಜೋದ್ಭವನ ಪಿತನು, ತಾನ್
ವಸುಮತಿಯೊಳವತರಿಸಿ ದೈತ್ಯರನು ಸಂಹರಿಸಿ
ಓಜೆಯಿಂ ಧರ್ಮಸಂಸ್ಥಾಪನೆಯ ಗೈದವನು
ಪರಶಿವನ ಪ್ರಿಯಸಖನು ವೇದಾರ್ಥಭೂಷಿತನು ಹರಿಯು ಹರಸುವುದೆಮ್ಮನು


ಕಲಹಂಸ ವಾಹಿನಿಯೆ ಧವಳಾಬ್ಜ ವಾಸಿನಿಯೆ
ವಾಗೀಶ ಕಾಮಿನಿಯೆ ವಿದ್ಯಾರ್ಥ ದಾಯಿನಿಯೆ
ವಿಶದೆ ವೀಣಾಲೋಲೆ ವರದೆ ಕರುಣಾಲೀಲೆ ವಿಮಲೆ ಸುಗುಣಾಶೀಲೆ^
ಸಕಲ ಸುರವಂದಿತೆಯೆ ಜನನಿ ವೀಣಾಪಾಣಿ
ಶೃತಿಗೀತ ಸಂಸ್ತುತೆಯೆ ಕಮಲಹಾಸಿನಿ ವಾಣಿ
ವಿನತಿಯಿಂ ನಮಿಸುವೆವು  ಶುಭದೆ ಸದಯಾಪೂರ್ಣೆ ಪ್ರೇಮದಿಂ ಸಲಹೆಮ್ಮನು


ತ್ರಿಪುರಹರ ಶೂಲಧರಂ
ದುರಿತಹರ ಗರಳಧರಂ
ವಿಷಯಹರ ಭುಜಗಧರಂ
ಮದನಹರಮನಲಧರಂ
ದರ್ಪಹರಮಿಂದುಧರಂ
ಪ್ರಣಮಾಮಿ ಭುವನಧರಂ
ಪ್ರಣತೋಸ್ಮಿ ಗಂಗಾಧರಂ

2 comments:

  1. Dear Lokesh very heartening to see the command you have on the anguage and the mythology/philosophy.
    Your poems will be much more authentic if you can manage aadi praasa along with anthya praasa.
    BWs
    Sudarshana

    ReplyDelete
  2. Hi sir,
    Thank you very much.
    I will surely try following proper alliteration.

    ReplyDelete